Saturday, 4 July 2020
ನೌಕರಬಂಧು ಗ್ರುಪ್ ಉದ್ಧೇಶ
ಇಂದು ವಿವಿಧ ಇಲಾಖೆಗಳಲ್ಲಿ
ಕಾರ್ಯ ನಿರ್ವಹಿಸುತ್ತಿರುವ ನಮ್ಮ ನೌಕರ ಬಂಧುಗಳಿಗೆ
ಸಮಯಕ್ಕೆ ಸರಿಯಾಗಿ ಮಾಹಿತಿ ದೊರಕುತ್ತಿಲ್ಲ ಆದ್ದರಿಂದ ಸಕಾಲಕ್ಕೆ ಮಾಹಿತಿಯನ್ನು ನೀಡುವ ಸಲುವಾಗಿ
ಸುಮಾರು 40 ಗ್ರುಪ್ ಗಳನ್ನು ರಚಿಸಲಾಗಿದೆ.ಈ ಗ್ರುಪ್ ಗಳು 5 ವರ್ಷಗಳಿಂದ ಕ್ರಿಯಾಶೀಲವಾಗಿವೆ.ಇದರಲ್ಲಿ
ಎಲ್ಲಾ ಇಲಾಖೆಗಳ ನೌಕರ ವರ್ಗ, ಸೇವಕರು,ಕ್ಲರ್ಕ್,ಹಾಗೂ ವಿವಿಧ ಹಂತದ ಅಧಿಕಾರಿಗಳು ಸೇರಿದ್ದಾರೆ. ಇವುಗಳ
ಲಿಂಕನ್ನು ನಂತರ ಈ ಬ್ಲಾಗ್ ಗೆ ಸೇರಿಸಲಾಗುವುದು.ಏಕೆಂದರೆ ಈ ಬ್ಲಾಗ್ ಇಷ್ಟೊಂದು ಸುಂದರವಾಗಿ ರಚಿಸುತ್ತಿರುವುದು
ಇದೀಗ.
ಇದಕ್ಕೆ ಜೀವ ತುಂಬಿದ್ದು ನಾನು
ಸೇವೆ ಸಲ್ಲಿಸಿದ ಕಲಬುರಗಿ ಜಿಲ್ಲೆ ಎಂದು ಹೇಳಬಹುದು.ಏಕೆಂದರೆ ಹಲವಾರು ರಾಜ್ಯದ ಸಂಪನ್ಮೂಲ ವ್ಯಕ್ತಿಗಳಿಗೆ
ಕೇಳಿದಾಗ ಯಾರೂ ಸಲಹೆ ನೀಡಿರಲಿಲ್ಲ ಆದರೆ ಕಲಬುರ್ಗಿಯಲ್ಲಿ ನಿಸ್ವಾರ್ಥ ಮನೋಭಾವನೆಯಿಂದ ವೆಬಿನಾರ್
ಗ್ರುಪ್ ರಚಿಸಿ ನಮ್ಮೆಲ್ಲರಿಗೂ ಇಂಥಹ ಹಲವಾರು ವಿಷಯ ತಿಳಿದುಕೊಳ್ಳಲು ಅವಕಾಶ ಮಾಡಿದ ನಮ್ಮ ಕಲಬುರಗಿಯ
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ.ಚಂದ್ರಶೇಖರ ಪವಾರ,ಶ್ರೀ ಪ್ರವೀಣ ಹಾಗೂ ಚಂದ್ರಕಲಾ ಮೇಡಂ ಹಾಗೂ ಸಚಿನಕುಮಾರ್
ಸರ್,ಭಾರತಿ ಮೇಡಂ,ಆರ್ಶಿಯಾ ಮೇಡಂ,ಇನ್ನೂ ಹಲವಾರು ಸಂಪನ್ಮೂಲ ವ್ಯಕ್ತಿಗಳನ್ನು ನಾನು ಇಲ್ಲಿ ಸ್ಮರಿಸದೇ
ಇರಲಾರೆ ಏಕೆಂದರೆ ರಾಜ್ಯದ ಯಾವ ಜಿಲ್ಲೆಯೂ ಮಾಡದ ಈ ಕೆಲಸ ಮಾಡಿದ್ದಾರೆ,ಅಷ್ಟೇ ಅಲ್ಲ್ದೇ ನಾವು ದುಡ್ಡು
ಕೊಟ್ಟರೂ ಇಷ್ಟೊಂದು ಕಲಿಸಲಾರರು.ಪ್ರತಿಯೊಂದನ್ನು ಇಂದು ಕಮರ್ಶಿಯಲ್ ಆಗಿ ನೋಡುವ ಜನಗಳ ಮಧ್ಯೆಯೂ ಕಲಬುರಗಿಯಲ್ಲಿ
ಇಂಥಹ ಸೇವೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.ಇದು ಹಿಂದುಳಿದ ಜಿಲ್ಲೆಯಲ್ಲ ಇಂದು ಈ ದೇಶದಲ್ಲಿಯೇ
ಮುಂದುವರೆದ ಜಿಲ್ಲೆ ಎನ್ನಬಹುದು. ಎಂದೆಂದಿಗೂ ನಾನು ಚಿರಋಣಿಯಾಗಿರುವೆ.ಹಾಗೆಯೇ ಕಲಬುರ್ಗಿಯ ಸಾರ್ವಜನಿಕ
ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳೂ ಕೂಡಾ ಈ ವೆಬಿನಾರ್ ತಂಡಕ್ಕೆ ಸ್ಪೂರ್ತಿ ತುಂಬಿದ್ದಾರೆ ಅವರಿಗೂ
ಧನ್ಯವಾಧಗಳು
Subscribe to:
Posts (Atom)
-
ಇಂದು ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ನೌಕರ ಬಂಧುಗಳಿಗೆ ಸಮಯಕ್ಕೆ ಸರಿಯಾಗಿ ಮಾಹಿತಿ ದೊರಕುತ್ತಿಲ್ಲ ಆದ್ದರಿಂದ ಸಕಾಲಕ್ಕೆ ಮಾಹಿತಿಯನ್ನು...
